Monday, December 16, 2013

'ಸಾರ್ಥಕ್ಯ'

ಇಳೆಯ ಒಡಲಿನೊಳಗಿನಿಂದ
ಪುಳಕಗೊಂಡು ಮೊಳಕೆಯೊಡೆದು
ಬೆಳೆದು ಬಂದು ನಗುತ ನಿಂತ ಕುಸುಮದಳಗಳು।
ಬೆಳಕು ಹರಿಯೆ ಪುಷ್ಪಪಾತ್ರೆ
ಯೊಳಗೆ ಸೇರಿ ಹರಿಯ ಪೂಜೆ
ಗಳಿಗೆಯಲ್ಲಿ ತೊಡಗಿಕೊಂಡು ಶ್ರೇಷ್ಠವಾದವು।।
***

ಮನದ ಬುಡದಿ ಕೊರೆಯುತಿದ್ದ
ದಿನವು ಭುಗಿಲು ಒಡೆಯುತ್ತಿದ್ದ
ತನ್ನ ಮಧುರ ಪ್ರೇಮ ಬಾಣ ಅಂದು ಹೂಡಲು।
ಜನುಮದರಸಗದುವು ತಾಗಿ
ತನುವು ಮನವು ಕರಗಿ ಕೃಷ್ಣ
ಬನದಿ ಹೊನಲಿನಲ್ಲಿ ಅಪ್ಪಿಕೊಂಡ ರಾಧೆಯ।।
***

ಷಟ್ಪದಿ: ಭೋಗ
______

ಬಿಲ್ಡ್ ಫೇಲ್ಯೂರ್ -(Build Failure): ಒಂದು ಜೆಂಕಿನ್ಸ್ ಕವಿತೆ

[Inspired by a poem of my hostel senior, Vinayak K] Shatpadi: Bhaminee - see the rules here     ಒಂದು ಬೋರಿಂಗ್ ಶುಕ್ರವಾರದಿ  ಮುಂದೆ ಬರಲಿಹ ಸಾಲು ರಜ...